ಸಂಕ್ರಾಂತಿ ಕಾವ್ಯ ಸುಗ್ಗಿ ಹೊಸ ಹಾಡು ವಸುಂಧರಾ ಕದಲೂರು ಇಂದಿನ ಹೊಸತುನಾಳೆ ಹಳತಾಗಬೇಕುಮತ್ತೆ ನಾಳೆಯೂ ಹೊಸತುದಿನವಾಗಬೇಕು.ಕ್ಷಣ ಕಳೆದು ಸಮಯಉರುಳುತಿರಬೇಕುಬೇರೆ ಗಳಿಗೆ ನಮಗಾಗಿಮರಳಿ ಬರಬೇಕು. ಬೆಳಕು ಮತ್ತೆ ಮತ್ತೆಉದಯಿಸುತಾ ತಾಹೇಳುವುದು ಏನನ್ನು?ನಿನ್ನೆಯೂಬಂದಿದ್ದೆನೆಂಬ ಬೇಸರವನ್ನೇ?!ಇರುಳ ಕತ್ತಲಲಿ ಮತ್ತೆಮುಳುಗುವ ಭಯವನ್ನೇ..?! ಅನುಕರಿಸು ದಿನಪನನುಅನುಸರಿಸು ಇಳೆಯಪರಿಭ್ರಮಣೆಯನು.ಆಗು ನೀ ನವ ನಾವೀನ್ಯಚೈತನ್ಯ ದೀವಿಗೆ.ಅಲೆಯಾಗು ಸೆಲೆಯಾಗುಭೋರ್ಗರೆದು ಮೊರೆದುಮಗುವಾಗಿ ಶರಣಾಗುಕಡಲ ದೇವಿಗೆ. ನೀನಾಗದಿರು ಎಂದೆಂದಿಗೂಚಿತ್ತ ಚಾಂಚಲ್ಯಚಕ್ರವ್ಯೂಹದಲಿ ಸಿಲುಕಿತೊಳಲುವ ಬಂಧಿಯಾದಖೈದಿಯಂತೆ;ಚಿಂತಿಸೊಮ್ಮೆ ಮನದೆರೆದುನೀ ಆಗು ನಿಗೂಢ ವ್ಯೂಹಕಳಿಚಿ ಅನಂತದೆಡೆಗೆ ಹಾರುವಪತಂಗದಂತೆ.
Copy and paste this URL into your WordPress site to embed
Copy and paste this code into your site to embed